ಚುಂಚಿಪಾಲ್ಸ್ ನಾಲೆಗೆ ಬಿದ್ದು ವಿದ್ಯಾರ್ಥಿ ಸಾವು

ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಜಾದಿನದ ಪ್ರವಾಸಕ್ಕೆಂದು ಬಂದಾಗ, ನಾಲೆಗೆ ಕಾರು ಮಗುಚಿ ಬಿದ್ದು ಒಬ್ಬ ವಿದ್ಯಾರ್ಥಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಾತನೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಜಾದಿನದ ಪ್ರವಾಸಕ್ಕೆಂದು ಬಂದಾಗ, ನಾಲೆಗೆ ಕಾರು ಮಗುಚಿ ಬಿದ್ದು ಒಬ್ಬ ವಿದ್ಯಾರ್ಥಿ ಮೃತಪಟ್ಟು, ಏಳು ಮಂದಿಯನ್ನು ಸ್ಥಳೀಯರು ಪಾರು ಮಾಡಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಬೊಮ್ಮಸಂದ್ರ ನಿವಾಸಿ ಸಾಗರ್ (19) ಮೃತ ದುರ್ದೈವಿ. ಈತ ರಾಜಾನುಕುಂಟೆಯ ಸಾಯಿ ಇನ್ ಸ್ಟಿಟ್ಯೂಷನ್‍ನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಎಂಟು ಜನ ವಿದ್ಯಾರ್ಥಿಗಳ ತಂಡ ಚುಂಚಿಪಾಲ್ಸ್ ನೋಡಲು ಬಂದಿದ್ದಾರೆ.

ಫಾಲ್ಸ್ ನಾಲೆಯ ಮೇಲೆ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿತು. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಶವದ ಹುಡುಕಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com