ಬಿಬಿಎಂಪಿ ವಿಭಜನೆ ಅನಿವಾರ್ಯ: ಬಿ.ಎಸ್.ಪಾಟೀಲ್

ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದ ಅಧ್ಯಾಯವಲ್ಲ. ಅದು ಈಗಲೂ ಜೀವಂತ ಎಂದು ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದ್ದಾರೆ.ಬೆಂಗಳೂರು ನಗರಕ್ಕೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಪುನಾರಚನೆ ಮಾಡುವುದು ತೀರಾ ಅನಿವಾರ್ಯವಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದ ಅಧ್ಯಾಯವಲ್ಲ. ಅದು ಈಗಲೂ ಜೀವಂತ ಎಂದು ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದ್ದಾರೆ. ಬೆಂಗಳೂರು ನಗರಕ್ಕೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಬಿಬಿಎಂಪಿಯನ್ನು ಪುನಾರಚನೆ ಮಾಡುವುದು ತೀರಾ ಅನಿವಾರ್ಯವಾಗಿದೆ.

ಈಗ ನಡೆದಿರುವ ಚುನಾವಣೆಗೂ, ವಿಭಜನೆಗೂ ಸಂಬಂಧವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಿಬಿಎಂಪಿ ಪುನಾರಚನಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಬಿಎಂಪಿಗೆ ಚುನಾವಣೆ ನಡೆದಿರುವ ಮಾತ್ರಕ್ಕೆ ಬಿಬಿಎಂಪಿ ಪುನಾರಚನೆ ಪ್ರಸ್ತಾಪ ಮುಗಿದಿದೆ ಎಂದರ್ಥವಲ್ಲ. ಪುನಾರಚನೆ ಸಂಬಂಧ ನಮ್ಮ ಸಮಿತಿ ವರದಿ ಸಲ್ಲಿಸಿತ್ತು. ಅದನ್ನಾಧರಿಸಿ ಸರ್ಕಾರ ಸೂಕ್ತ ವಿಧೇಯಕವನ್ನೇ ರಚಿಸಿದೆ. ಅದೀಗ ರಾಷ್ಟ್ರಪತಿಯವರ ಅಂಕಿತದ ನಿರೀಕ್ಷೆಯಲ್ಲಿದೆ. ರಾಷ್ಟ್ರ-ಪತಿಗಳ ಅಂಕಿತ ಬೀಳುತ್ತಿದ್ದಂತೆ ಬಿಬಿಎಂಪಿ ಪುನಾರಚನೆ ಸಹಜವಾಗಿಯೇ ಅನುಷ್ಠಾ ನವಾಗುತ್ತದೆ. ಆದ್ದರಿಂದ ಪುನಾರಚ ನೆ ಇನ್ನೂ ಜೀವಂತ ಎಂದು ಬಿ.ಎಸ್.ಪಾಟೀಲ್ ಸ್ಪಷ್ಟಪಡಿಸಿದರು.

ವರದಿಯನ್ನು ಸರ್ಕಾರ ಹೇಗೆಲ್ಲಾ ಅನುಷ್ಠಾನಗೊಳಿಸಬೇಕು ಎಂದು ಸಲಹೆ ಪಡೆಯಲು ಸರ್ಕಾರ ಸಮಿತಿ ಅವಧಿಯನ್ನು ಮುಂದಿನ ಜನವರಿ ಅಂತ್ಯದವರೆಗೂ ವಿಸ್ತರಿಸಿದೆ. ಆದ್ದ ರಿಂದ ಪುನಾರಚನೆ ಮತ್ತು ನಗರದಲ್ಲಿ ಗುಣಮಟ್ಟದ ಸಂಬಂಧ ಸರ್ಕಾರ ನಮ್ಮ ಸಲಹೆ ಪಡೆಯುತ್ತಿದೆ. ಹೀಗಾಗಿ ಸಿಎಂ ಜತೆ ಚರ್ಚಿಸಲಾಯಿತು ಎಂದು ಸಮಿತಿ ಸದಸ್ಯರೂ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com