ಟೆಕ್ಕಿ ಸಾವಿಗೆ ಕಾರಣವಾದ ದೇವರಬೀಸನಹಳ್ಳಿ ಮೇಲ್ಸೆತುವೆ ಗುಂಡಿ ಆದರ್ಶ ದಂಪತಿದಂಪತಿ ಬನಶಂಕರಿ 1ನೇ ಹಂತದಲ್ಲಿ ವಾಸವಿದ್ದರು. ಸ್ತುತಿ ಲ್ಯಾಂಡ್ ಮಾರ್ಕ್ ಸಾಫ್ಟ್ವೇರ್ ಕಂಪನಿಯಲ್ಲಿ ಸಿನಿಯರ್ ಟೆಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಓಂಪ್ರಕಾಶ್ ಕೂಡಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾರೆ. ಐದು ವರ್ಷದಿಂದ ನಗರದಲ್ಲಿ ನೆಲೆಸಿರುವ ಇವರ ವಿವಾಹ ಎರಡೂವರೆ ವರ್ಷಗಳ ಹಿಂದೆ ಆಗಿತ್ತು. ಆದರೆ, ಹಬ್ಬದ ದಿನವೇ ಈ ರೀತಿ ದುರಂತ ಸಂಭವಿಸುತ್ತದೆ ಎಂದು ಊಹಿಸಿರಲಿಲ್ಲ ಎಂದು ಸಂಬಂಧಿಎಂ.ಪಿ. ಶರ್ಮಾ ಹೇಳಿದರು. ರಾತ್ರಿ 9 ಗಂಟೆಗೆ ಸ್ತುತಿ ಹಾಗೂ ಓಂಪ್ರಕಾಶ್ ತೆರಳಿದರು. ಆದರೆ, ಇನ್ನು ಕೆಲ ಸ್ನೇಹಿತರು ಇದ್ದ ಕಾರಣ ಅವರೊಂದಿಗೆ ಮಾತನಾಡುತ್ತಾ ಕುಳಿತಿದ್ದೆ. ಅರ್ಧ ತಾಸಿನಲ್ಲೇ ಅಪಘಾತದ ಮಾಹಿತಿ ಬಂದಿದ್ದು ನಂಬಲಾಗಲಿಲ್ಲ. ಗಣೇಶ ಹಬ್ಬ ಆಚರಿಸಿದ ಸಂಭ್ರಮ ಕೆಲವೇ ಕ್ಷಣಗಳಲ್ಲಿ ಹೊರಟು ಹೋಯಿತು ಎಂದು ಸ್ನೇಹಿತ ಸೌರಭ್ ದುಃಖಿತರಾಗಿ ಹೇಳಿದರು.