ಬೆಂಗಳೂರು: ಗಣೇಶ ಚತುರ್ಥಿ ಹಬ್ಬ ಕಳೆಯುತ್ತಿದ್ದಂತೆ ನಗರದ ಪಾದಚಾರಿ ಮಾರ್ಗಗಳಲ್ಲಿ, ರಸ್ತೆ ಬದಿಗಳಲ್ಲಿ ಕಸದ ರಾಶಿ ಬಿದ್ದಿದೆ. ಕೆ.ಆರ್. ಮಾರುಕಟ್ಟೆ, ಕೆ.ಆರ್. ಪುರ ಮಾರುಕಟ್ಟೆ, ಜಯನಗರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಬಸವನಗುಡಿಯ ಗಾಂಧಿಬಜಾರ್, ಹಲಸೂರು, ವಿಲ್ಸನ್ ಗಾರ್ಡನ್, ಆಡುಗೋಡಿ ಸೇರಿದಂತೆ ಹಲವು ಸ್ಥಳಗಳಲ್ಲಿ ಕಸದ ರಾಶಿ ಬಿದ್ದಿದೆ. ಬಾಳೆಕಂಬ, ಬಾಳೆಎಲೆ, ಹೂವು, ಹಣ್ಣುಕಾಯಿ ಕಾಗದದ ರಾಶಿ ಅಲ್ಲಲ್ಲಿ ಬಿದ್ದಿದೆ. ವಿವಿಧ ಸಂಘಗಳು ಹಾಗೂ ವ್ಯಾಪಾರಿಗಳು ಮಾರಾಟ ಮಾಡಿದ ಸ್ಥಳದಲ್ಲೇ ಕಸ ಹಾಕಿದ್ದಾರೆ.