ಸಿಂಧಗಿ: ಏತ ನೀರಾವರಿ ಕಾಲುವೆಗೆ ಎತ್ತಿನಗಾಡಿ ಉರುಳಿ ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಬಳಗಾನೂರು ಎಂಬಲ್ಲಿ ಬುಧವಾರ ನಡೆದಿದೆ.
ಮೃತರಲ್ಲಿ ಇಬ್ಬರು ಬಾಲಕ ರಾದ ಆಕಾಶ್(5 )ಕಾಶಿನಾಥ್ (6) ಎನ್ನುವವರ ಶವಗಳು ಪತ್ತೆಯಾಗಿದ್ದು. ನಾಪತ್ತೆಯಾಗಿರುವ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಎತ್ತಿನಗಾಡಿ ಉರುಳಿದೆ ಎಂದು ಹೇಳಲಾಗಿದೆ.
ನೀಲವ್ವ (30) ಮುತ್ತು( 8 )ಮುತ್ತು ಚೆನ್ನವ್ವ( 20)ನಿಂಗಪ್ಪ(19)ಎನ್ನುವವರ ಶವಗಳಿಗಾಗಿ ಶೋಧ ನಡೆಸಲಾಗುತ್ತಿದೆ.
ಘಟನೆಯಲ್ಲಿ ಎತ್ತಿನ ಗಾಡಿಯಲ್ಲಿದ್ದ 70 ವರ್ಷದ ವೃದ್ಧೆ ಮತ್ತು ಬಾಲಕಿಯೊಬ್ಬಳು ಪಾರಾಗಿದ್ದಾರೆ. ಕಗ್ಗಳ್ಳಿಯಿಂದ ಮಳಸಾವಳಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಶವಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
Advertisement