ಬನ್ನೇರುಘಟ್ಟದಲ್ಲಿ ಸಿಂಹ ಸಾವು

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಗುರುವಾರ ಸಹದೇವ ಎಂಬ ಹೆಸರಿನ ಸಿಂಹವೊಂದು ಉಸಿರಾಟ ತೊಂದರೆಯಿಂದ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಗುರುವಾರ ಸಹದೇವ ಎಂಬ ಹೆಸರಿನ ಸಿಂಹವೊಂದು ಉಸಿರಾಟ ತೊಂದರೆಯಿಂದ ಮೃತಪಟ್ಟಿದೆ.

ಸಿಂಹವು ಹಲವು ದಿನಗಳಿಂದ ಶ್ವಾಸಕೋಶ ತೊಂದರೆ, ನ್ಯುಮೋನಿಯಾದಿಂದ ಬಳಲುತ್ತಿತ್ತು. ಹೀಗಾಗಿ, ಅದಕ್ಕೆ ಸೆ.19ರಿಂದ ಚಿಕಿತ್ಸೆಗೆ ನೀಡಲಾಗುತ್ತಿತ್ತು. ಆದರೆ, ಗುರುವಾರ ಮೃತಪಟ್ಟಿದೆ.

ಸಿಂಹ ಸಹದೇವಕ್ಕೆ 6ವರ್ಷ ವಯಸ್ಸಾಗಿತ್ತು. ದೇಹದ ಅಂಗಾಂಗಗಳ ಮಾದರಿಯನ್ನು ತೆಗೆದು ಐಎಎಚ್ ಹಾಗೂ ವಿಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com