ಭಗವಾನ್ ವಿರುದ್ಧ ದೂರು

ಹಿಂದೂ ದೇವತೆಗಳ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಭಗವಾನ್ ವಿರುದ್ಧ ಶ್ರೀರಾಮ ಸೇನೆ...
ಕೆಎಸ್ ಭಗವಾನ್
ಕೆಎಸ್ ಭಗವಾನ್

ಬೆಂಗಳೂರು: ಹಿಂದೂ ದೇವತೆಗಳ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಭಗವಾನ್ ವಿರುದ್ಧ ಶ್ರೀರಾಮ ಸೇನೆ ಬೆಂಗಳೂರು ನಗರ ಸಮಿತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದೆ.

ಸಮಿತಿ ಸದಸ್ಯರು ಠಾಣೆಗೆ ಆಗಮಿಸಿ ಪ್ರೊ.ಭಗವಾನ್ ರ ವಿರುದ್ಧ ದೂರು ನೀಡಿ ಅವರನ್ನು ಬಂಧಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು. ಈಗಾಗಲೇ ಪ್ರಕರಣ ದಾಖಲಾಗಿರುವ ಕಾರಣ ಮತ್ತೊಮ್ಮೆ ಎಫ್ ಐಆಱ್ ದಾಖಲಿಸುವ ಅಗತ್ಯವಿಲ್ಲ.

ಅದರೊಂದಿಗೆ ಈ ಪ್ರಕರಣವನ್ನು ಸೇರಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದೆ,'' ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿ ದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com