ಬೆಂಗಳೂರು: ಹಿಂದಿನ ಹೋರಾಟಗಾರರ ಬಗ್ಗೆ ಯುವಪೀಳಿಗೆಗೆ ತಿಳಿಸಿ, ಯುವಜನರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಭಾರತೀಯ ವಿದ್ಯಾಭವನದಲ್ಲಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಬುಧವಾರ ಆಯೋಜಿಸಿದ್ದ `ಕನ್ನಡ ಸೇನಾನಿ ಜಿ.ನಾರಾಯಣಕುಮಾರ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ' ಅವರು ಮಾತನಾಡಿದರು. ಹಿರಿಯ ಹೋರಾಟಗಾರನ್ನು ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಮೈಸೂರು ಪಾಲಿಕೆ ಮಾಜಿ ಮೇಯರ್ ಅನಂತ, ಸಾಹಿತಿ ಶಿವಶಂಕರ್, ಎಂ.ತಿಮ್ಮಯ್ಯ, ಹಿರಿಯ ಪತ್ರಕರ್ತ ಬಂಕಾಪುರ ಅವರಿಗೆ ಜಿನಾಕು ಪ್ರಶಸ್ತಿ ಪ್ರದಾನ ಮಾಡಲಾಯಿತು.
Advertisement