ಬೀದರ್: ಕಾಂಗ್ರೆಸ್ನಲ್ಲಿ ಸುಳ್ಳುಗಾರರದ್ದೇ ಕಾರುಬಾರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಗಳೆಲ್ಲ ಸುಳ್ಳಾಗಿವೆ. ಈ ಮೊದಲು ವೀರಪ್ಪ ಮೊಯ್ಲಿ ಅವರು ಸುಳ್ಳುಗಾರ ಸಿಎಂ ಎಂದೆನಿಸಿಕೊಳ್ಳುತ್ತಿದ್ರು, ಇದೀಗ ಮಹಾ ಸುಳ್ಳುಗಾರ ಪಟ್ಟಕ್ಕೆ ಸಿದ್ದರಾಮಯ್ಯ ಸೇರ್ಪಡೆಯಾಗಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಿಂದ ಎಲ್ಲ ರೀತಿಯ ನೆರವು ಸಿಗುತ್ತಿದ್ದರೂ ರಾಜ್ಯ ಸರ್ಕಾರ ಅದೆಲ್ಲವನ್ನೂ ಬದಿಗಿಟ್ಟು ನಿತ್ಯ ಬೆಳಗಿನಿಂದ ಸಂಜೆವರೆಗೆ ಕೇವಲ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ. ತಕ್ಷಣ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
Advertisement