ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ಉದ್ಯಮಿಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಕಾಳಗದಲ್ಲಿ ಓರ್ವ ಉದ್ಯಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ವಾಲಿಯರ್ ಮೂಲದ ಟೆಕ್ಸ್ಟೈಲ್ ಉದ್ಯಮಿಗಳಾದ ಬಿನೋದ್ ಮತ್ತು ಮುಖೇಶ್ ನಡುವೆ ಕೆ.ಆರ್.ಪುರಂನ ಶಾಂತಿಲೇಔಟ್ ನಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ಬಿನೋದ್ ಅವರ ಎದೆ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿ ಎನ್ನಲಾಗಿದೆ.
ಮುಖೇಶ್ ಉದ್ಯಮಿ ಬಿನೋದ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದು, ಈ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.