ರೈತಾಪಿ ಮತ್ತು ಶ್ರಮಿಕ ವರ್ಗ ಭೂಮಿಯನ್ನು ಆರಾದಿಸುತ್ತಾರೆ. ಬಂಡವಾಳ ಶಾಹಿ ವರ್ಗ ಭೂಮಿಯನ್ನು ಕಾಮಿಸುತ್ತಾರೆ. ಭೂ ಆರಾಧಕರನ್ನು ತುಳಿದು ಭೂಕಾಮಿಗಳನ್ನು ರಕ್ಷಣೆ ಮಾಡಿ ಮೇಲೆತ್ತುವ ಆರ್ಥಿಕ ವ್ಯವಸ್ಥೆ ನಮ್ಮ ದೇಶದಲ್ಲಿದೆ ಎಂದರು. ಭೂಮಿ ಮಕ್ಕಳಿಂದ ಹುಟ್ಟಿದ ಕಲೆಯೇ ರಂಗಭೂಮಿ. ಬೇರೆ ಕಲಾಪ್ರಕಾರಗಳಿಗೆ ಇಲ್ಲದ ಭೂಮಿ ಎಂಬ ಪ್ರತ್ಯಯ ರಂಗ ಭೂಮಿಗೆ ಬಂದಿದೆ. ಇಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಒಳಗೊಳ್ಳುತ್ತಾರೆ ಎಂದು ತಿಳಿಸಿದರು. ಹೈದ್ರಾಬಾದ್ ವಿವಿಯ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ಪ್ರಕರಣದಲ್ಲಿ ಜಾತಿ ರಾಜಕೀಯ ಮಾಡುತ್ತಿರುವುದು ಶೋಚನೀಯ ಎಂದರು. ವೇಮುಲ ದಲಿತ ಜಾತಿಗೆ ಸೇರಿದವರೋ ಅಲ್ಲವೋ ಎಂಬ ಚರ್ಚೆ ನಡೆಯುತ್ತಿದೆ. ಆದರೆ ದಲಿತ ಹಿಂದುಳಿದ ವರ್ಗ ಮೇಲ್ಜಾತಿಯನ್ನು ಮೀರಿ ಒಂದು ಜೀವ ಹೋಗಿದೆ ಎಂಬ ಯೋಚನೆ ಯಾರಿಗೂ ಇಲ್ಲ. ಇಲ್ಲಿ ಸರ್ಕಾರಿ ಪ್ರಾಯೋಜಿತ ಜಾತಿ ರಾಜಕೀಯ ನಡೆಯುತ್ತಿದೆ. ಮನೆಯಲ್ಲಿದ್ದ ರೋಹಿತ್ ಕುಟುಂಬವನ್ನು ಬೀದಿಗೆ ತಂದಿರುವುದು ವಿಷಾದನೀಯ ಎಂದರು. ಸರ್ಕಾರಗಳು ಎಡ, ಬಲ ಪಂಥೀಯ ಸಿದ್ಧಾಂತ ಬಿಟ್ಟು ಜೀವ ಪಂಥೀಯವಾಗಿರಬೇಕು ಎಂದು ತಿಳಿಸಿದರು.