ಬತ್ತ ಕಟಾವು ಯಂತ್ರಕ್ಕೆ ಸಿಲುಕಿ ರೈತ ಸಾವು

ಜಮೀನಿನ ಬದುವಿನ ಮೇಲೆ ಕುಳಿತಿದ್ದ ರೈತನೊಬ್ಬನ ಮೇಲೆ ಕಟಾವು ಯಂತ್ರ ಹರಿದು ಸಾವನ್ನಪ್ಪಿದ ಧಾರುಣ ಘಟನೆ ಕೊಳ್ಳೆಗಾಲದಲ್ಲಿ ಸೋಮವಾರ ನಡೆದಿದೆ....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊಳ್ಳೆಗಾಲ: ಜಮೀನಿನ ಬದುವಿನ ಮೇಲೆ ಕುಳಿತಿದ್ದ ರೈತನೊಬ್ಬನ ಮೇಲೆ ಕಟಾವು ಯಂತ್ರ ಹರಿದು ಸಾವನ್ನಪ್ಪಿದ ಧಾರುಣ ಘಟನೆ ಕೊಳ್ಳೆಗಾಲದಲ್ಲಿ ಸೋಮವಾರ ನಡೆದಿದೆ.

ಬತ್ತ ಕಟಾವು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತ ರೈತನನ್ನು 62 ವರ್ಷದ ಮಲ್ಲಪ್ಪ ಎಂದು ಗುರುತಿಸಲಾಗಿದೆ. ರೈತ ಮಲ್ಲಪ್ಪ ಜಮೀನಿನ ಬದುವಿನಲ್ಲಿ ಕುಳಿತಿದ್ದ, ಈ ವೇಳೆ ಬತ್ತ ಕಟಾವು ಮಾಡುತ್ತಿದ್ದ ಒಕ್ಕಣೆ ಯಂತ್ರ ಅಕಸ್ಮಾತಾಗಿ ಆತನ ಮೇಲೆ ಹರಿದಿದ್ದು, ರೈತ ಮಲ್ಲಪ್ಪ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಟಾವು ಯಂತ್ರ ಪಕ್ಕಕ್ಕೆ ಸರಿಯುತ್ತಿದ್ದಂತೆಯೇ ಮಲಪ್ಪನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿತ್ತು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com