ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಅಪಹರಿಸಿದ್ದಾಕೆ ಆತ್ಮಹತ್ಯೆಗೆ ಶರಣು..!

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಶರಣಾದ ಘಟನೆ ಗುರುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಶರಣಾದ ಘಟನೆ ಗುರುವಾರ ನಡೆದಿದೆ.

ಧಾರವಾಡದ ಲಕ್ಷ್ಮೀಸಿಂಗನಕೇರಿ ನಿವಾಸಿ ಸುರೇಖಾ ಕಾಲಾಡಿ (24 ವರ್ಷ) ಮಾನಸಿಕವಾಗಿ ನೊಂದು ಧಾರವಾಡ ಕೇಂದ್ರ ಕಾರಾಗೃಹದ ಶೌಚಾಲಯಲ್ಲಿ ನೇಣಿಗೆ ಶರಣಾಗಿದ್ದಾರೆ. ಎರಡು ಬಾರಿ ಗರ್ಭಪಾತ ಆದ ಮೇಲೆ ಮಗು ಹೆರುವ ಆಸೆ ಕೈಗೂಡದೆ ಬೇಸತ್ತಿದ್ದ ಸುರೇಖಾ ಬೇರೊಬ್ಬರ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.

ಹುಬ್ಳಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ವೇಷದಲ್ಲಿ ಬಂದು ಅನಿತಾ ಎಂಬುವವರ 10 ದಿನಗಳ ಹೆಣ್ಣುಮಗುವನ್ನು ಅಪಹರಿಸಿದ್ದರು ಎಂದು ಮೊದಲು ವರದಿಯಾಗಿತ್ತು. ಆದರೆ ಈಕೆ ಮಗುವನ್ನು ಕದ್ದಿರಲಿಲ್ಲ. ಬದಲಾಗಿ ಮಗುವಿನ ಅಜ್ಜಿಯೇ ರು.500ಗೆ ಮಾರಾಟ ಮಾಡಿದ್ದರು ಎಂದು ಸುರೇಖಾ ಪತಿ ಆರೋಪ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com