ಅಮೀನಗಡ: ಕಂದಗಲ್ ಹನುಮಂತರಾಯರ ನಾಟಕಗಳು ಶುದ್ಧ ಕನ್ನಡ ಸಾಹಿತ್ಯ ದಲ್ಲಿ ರಚನೆ ಆದ ನಾಟಕಗಳಾಗಿವೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ಪುನರ್ ವಿಂಗಡಣೆ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಅಮೀನಗಡದಲ್ಲಿ ಸೋಮವಾರ ಗ್ರಾಮ ದೇವತೆಗೆ ಉಡಿ ತುಂಬುವ ಕಾರ್ಯಕ್ರಮ ನಿಮಿತ್ತ ಕಲಾ ಕುಸುಮಾ ನಾಟ್ಯ ಸಂಘ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದಿ.ಕಂದಗಲ್ ಹನುವಂತರಾಯರ ರಕ್ತರಾತ್ರಿ ಪೌರಾಣಿಕ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಮಾತನಾಡಿ, ಇಂತಹ ಪೌರಾಣಿಕ ನಾಟಕಗಳು ನಮ್ಮ ಯುವಕರಲ್ಲಿ ನಾಡಿನ ಸಂಸ್ಕೃತಿ, ಶೌರ್ಯ, ಸಾಹಸಗಳನ್ನು ಬಿಂಬಿಸುತ್ತಿದ್ದವು. ಇಂದು ಇಂತಹ ನಾಟಕ ಪ್ರದರ್ಶನ ಕಡಿಮೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಶಂಕರರಾಜೇಂದ್ರ ಶ್ರೀ, ಸಿದ್ಧನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಶ್ರೀ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಹುನಗುಂದ ಶಾಸಕ ಡಾ. ವಿಜಯಾನಂದ ಕಾಶಪ್ಪನವರ್, ಡಾ. ಎಂ.ಎಸ್. ದಡೇನವರ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್. ಚಳ್ಳಗಿಡದ, ತಾಪಂ ಸದಸ್ಯ ಸಯ್ಯದಪೀರಾ ಖಾದ್ರಿ ಮುಂತಾದವರು ಇದ್ದರು. ವಿಷ್ಣು ಗೌಡರ ಸ್ವಾಗತಿಸಿದರು. ಮಹಾದೇವ ಬಸರಕೋಟ ನಿರೂಪಿಸಿದರು.
Advertisement