ಜ್ಞಾನಪೀಠಿಗರಿಗೆ ಪಿತ್ತ ನೆತ್ತಿಗೇರಿದೆ: ಡಾ. ಹಂಪನಾ

Updated on

ಜಮಖಂಡಿ: ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಕವಿ ಎನಿಸಿಕೊಂಡವರು, ಜ್ಞಾನಪೀಠ ಪ್ರಶಸ್ತಿ ಪಡೆದವರು ಪಿತ್ತ ನೆತ್ತಿಗೇರಿದವರಂತೆ ವರ್ತಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ವಿದ್ವಾಂಸ ಡಾ.ಹಂ.ಪ. ನಾಗರಾಜಯ್ಯ ಟೀಕಿಸಿದ್ದಾರೆ. ರತ್ನತ್ರಯ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಆಶ್ರಯದಲ್ಲಿ ಶನಿವಾರ ಬಸವ ಭವನದ ಸಭಾಭವನದಲ್ಲಿ 2 ದಿನಗಳ ಆದಿಕವಿ ಪಂಪ- ಕವಿ, ಕಾವ್ಯ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಾಹಿತಿಗಳು ಪ್ರಶಸ್ತಿಗಾಗಿ ಬಾಗಿಲು ಕಾಯುವುದನ್ನು ಬಿಟ್ಟು ಉತ್ತಮ ಕೃತಿ ಹೊರ ತರುವ ಕೆಲಸ ಮಾಡಲಿ. ಸಾಹಿತಿಗಳಾದ ನಾವು ಜವಾಬ್ದಾರಿಯಿಂದ ವರ್ತಿಸಬೇಕು. ನೈತಿಕತೆ, ಆದರ್ಶಗಳನ್ನು ಆಧಾರವಾಗಿಟ್ಟುಕೊಂಡು ಕೃತಿ ಹೊರತರಬೇಕು. ಪಂಪನಿಗೆ ಸಾಕಷ್ಟು ಬಿರುದು- ಬಾವಲಿಗಳು ಬಂದರೂ ಅವನಲ್ಲಿ ಅಹಂ ಇರಲಿಲ್ಲ. ಕನ್ನಡಕ್ಕೆ ಪಂಪ ಶ್ರೇಷ್ಠ ಕವಿ ಎಂದ ಅವರು, ನಮ್ಮ ದೇಶ, ಭಾಷೆ, ನೆಲ, ಜಲದ ಬಗ್ಗೆ ಕನ್ನಡಿಗರಲ್ಲಿ ಸ್ವಾಭಿಮಾನ ಬೆಳೆಸಿ, ಕನ್ನಡಾಭಿಮಾನದ ಕಿಚ್ಚು ಹಚ್ಚಿದವರಲ್ಲಿ ಪಂಪ ಅಗ್ರಗಣ್ಯ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com