ಸಾಲ ಬಾಧೆರೈತ ಆತ್ಮಹತ್ಯೆ

Published on

ಚಡಚಣ: ಸಾಲಬಾಧೆಯಿಂದ ಬೇಸತ್ತು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹತ್ತಳ್ಳಿ ಗ್ರಾಮದ ಮತ್ತೊಬ್ಬ ರೈತನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ.
ಜಕ್ಕಪ್ಪ ಶಿವಪ್ಪ ಹೇರಕಾರ (38) ಆತ್ಮಹತ್ಯೆಗೆ ಶರಣಾದಾತ. 2 ತಿಂಗಳ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ಮೂರೂವರೆ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು ಬೆಳೆ ಸಂಪೂರ್ಣ ನಾಶವಾಗಿತ್ತು. ಹೀಗಾಗಿ ಚಡಚಣ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಬೆಳೆಸಾಲ ಹಾಗೂ ಪೈಪ್‌ಲೈನ್‌ಗಾಗಿ ರು. 3 ಲಕ್ಷ, ಹತ್ತಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರು. 42 ಸಾವಿರ, ಕೈಗಡವಾಗಿ ಖಾಸಗಿಯವರಲ್ಲಿ ರು. 7 ಲಕ್ಷ ಸಾಲ ಮಾಡಿದ್ದ. ಹಾವಿನಾಳ ಗ್ರಾಮದ ಇಂಡಿಯನ್ ಶುಗರ್ಸ್‌ಗೆ ಸಾಗಿಸಿದ್ದ ಕಬ್ಬಿನ ಬಾಕಿ ಹಣ ಈವರೆಗೂ ಪಾವತಿಯಾಗಿರಲಿಲ್ಲ. ಇದರಿಂದ ನೊಂದು ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.        

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com