ಸಿಂಧನೂರು: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಪಂ ಮಟ್ಟದಲ್ಲಿ ಇಂತಹ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಗ್ರಾಮದ ಪೊಲೀಸ್ ಕಾಲೋನಿಗೆ ಒದಗಿಸಿರುವ ಕುಡಿವ ನೀರು ಯೋಜನೆಗೆ ಚಾಲನೆ ನೀಡಿ ನಂತರ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಪ್ರತಿ ಗ್ರಾಪಂ ಅಧಿಕಾರಿಗಳ, ಆಡಳಿತ ಮಂಡಳಿಗಳ ಸಾರ್ವಜನಿಕ ಸಹಕಾರದಿಂದ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಶ್ರಮಿಸುತ್ತಿದ್ದೇನೆ. ಬಳಗಾನೂರು, ತುರ್ವಿ ಹಾಳ, ಮಸ್ಕಿಗಳು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತನೆಗೊಳ್ಳಲಿವೆ ಎಂದರು. ಪಿಎಸ್ಐ ಮಹಾಂತೇಶ ಸಜ್ಜನ್, ಪಿಡಿಒ ಸಿ.ಎಚ್. ಮುದುಕಪ್ಪ ಮಾತನಾಡಿದರು.
ಸನ್ಮಾನ: ಶಾಸಕ ಪ್ರತಾಪಗೌಡ ಪಾಟೀಲ್, ತಾಪಂ ಇಒ ಜೆ.ಬಿ. ಹೂಗಾರ, ಪಿಡಿಒ ಸಿ.ಎಚ್ ಮುದುಕಪ್ಪ, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ, ಉಪಾಧ್ಯಕ್ಷ ಹನುಮೇಶ ಹೂಗಾರ, ಮಾಜಿ ಉಪಾಧ್ಯಕ್ಷ ಎಚ್.ಮಹಾಬಳೇಶ, ಶಿವಪ್ಪ ಗದ್ದಿ, ಪಿಎಸ್ಐ ಮಹಾಂತೇಶ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಹುಲ್ಲೂರ ಶೇಖರಪ್ಪ ಮೇಟಿ, ಅಜಯಕುಮಾರ ನಾಡಗೌಡ, ಬಳಗಾನೂರ ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಮಾಲಿಪಾಟೀಲ್, ಬಿ.ತಿಕ್ಕಯ್ಯ, ಯಂಕಪ್ಪ ನಾಯಕ, ತಾಪಂ ಮಾಜಿ ಸದಸ್ಯ ಬಸ್ಸನಗೌಡ, ವಿರುಪಣ್ಣ ಗುತ್ತೇದಾರ ಮತ್ತಿತರರು ಭಾಗವಹಿಸಿದ್ದರು.
ಸಿಬ್ಬಂದಿ-ಆಡಳಿತ 2 ಕಣ್ಣುಗಳಿದ್ದಂತೆಗುಲ್ಬರ್ಗ: ಸಂಸ್ಥೆಯ ಆಡಳಿತ ವ್ಯವಸ್ಥೆ ಮತ್ತು ನೌಕರರು ಎರಡು ಕಣ್ಣುಗಳಿದ್ದಂತೆ. ಎರಡೂ ಕಣ್ಣುಗಳ ದೃಷ್ಟಿ ಮಾತ್ರ ಒಂದೇ ಆಗಿರುವಂತೆ ಸಂಸ್ಥೆಯ ಅಭಿವೃದ್ಧಿಯೊಂದಿಗೆ ನಿಮ್ಮ ಯೋಗಕ್ಷೇವುವೇ ನನ್ನ ಬಹುದೊಡ್ಡ ಕನಸು ಎಂದು ಎನ್ಇಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಹೇಳಿದರು. ಈಶಾನ್ಯ ಸಾರಿಗೆ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರ ಆಪ್ತ ವಲಯದಲ್ಲಿ ಸಂಸ್ಥೆಯ ನೌಕರರ ವಿವಿಧ ಸಂಘಟನೆಗಳಾದ ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾಮಂಡಳ, ಎಸ್ಸಿ ಎಸ್ಟಿ ನೌಕರರ ಸಂಘ, ಕನ್ನಡ ಕ್ರಿಯಾ ಸಮಿತಿ, ಲಿಂಗಾಯತ ಸಮಾಜ, ಕೋಲಿ ಸಮಾಜ, ಕುರುಬ ಸಮಾಜ ಹಾಗೂ ಮುಸ್ಲಿಂ ಸಮಾಜ ನೌಕರರ ಸಂಘಗಳ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೀವು ನನಗೆ ಸನ್ಮಾನಿಸುವ ಮೂಲಕ ನಿಮ್ಮ ಗೌರವವನ್ನು ಹೆಚ್ಚಿಸಿಕೊಂಡಿದ್ದೀರಿ. ಅಲ್ಲದೇ ಈ ಸಂಸ್ಥೆಗಾಗಿ ನಾನು ಸಲ್ಲಿಸುತ್ತಿರುವ ಸೇವೆಯ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದ್ದೀರಿ ಎಂದು ಹೇಳಿದರು. ವೇದಿಕೆಯಲ್ಲಿದ್ದ ಸಂಸ್ಥೆಯ ಹಿರಿಯ ನಿವೃತ್ತ ಅಧಿಕಾರಿ ಹಂಪಯ್ಯ ಮಾತನಾಡಿದರು.
ಬಳ್ಳುಂಡಗಿ: ಪುರಾಣ ಆರಂಭ
ಜೇವರ್ಗಿ: ತಾಲೂಕಿನ ಬಳ್ಳುಂಡಗಿಯಲ್ಲಿ ರೇವಣಸಿದ್ದೇಶ್ವರ ಹಾಗೂ ಸಿದ್ದರಾಮೇಶ್ವರರ ಪುರಾಣ ಆ.1ರಂದು ಆರಂಭವಾಗಿದೆ. ಒಂದು ತಿಂಗಳವರೆಗೆ ಪ್ರತಿ ದಿನ ಸಂಜೆ 7.30ರಿಂದ 8.30ರವರೆಗೆ ಪುರಾಣ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ ನಡೆಸಿಕೊಡಲಿದ್ದಾರೆ. ಹುಬ್ಬಳ್ಳಿಯ ಹೇಮಯ್ಯ ಶಾಸ್ತ್ರಿ ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾಮಲಿಂಗಯ್ಯ ಗವಾಯಿ ಗೌಡಗಾಂವ್ ಹಾಗೂ ಸಿದ್ದಣ್ಣ ದೇಸಾಯಿ ಕಲ್ಲೂರ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಆ.29ರಂದು ಕುಂಭ ಮೇಳದೊಂದಿಗೆ ಪುರಾಣ ಸಮಾರೋಪ ಸಮಾರಂಭ ಜರುಗಲಿದೆ ಎಂದು ಗ್ರಾಮದ ಪರಮಾನಂದ ಸಂಗೊಂಡ ತಿಳಿಸಿದ್ದಾರೆ.
Advertisement