ಚರ್ಚೆಯಲ್ಲಿ ಅತಿ ಜೋರಾಗಿ ಚೀರಾಡುತ್ತಿರುವವರು ಯಾರೆಂದರೆ, ಚರ್ಚೆ ಯಾವುದರ ಬಗ್ಗೆ ನಡೆಯುತ್ತಿದೆ ಎಂದು ತಿಳಿಯದೇ ಇರುವವರು!
- ಬಹಾದುರ್
ಬೆಂಗಳೂರಿಗೆ ಐಟಿ ಪ್ರೊಫೆಷನಲ್ ಹೇಗೋ, ಹರ್ಯಾಣಕ್ಕೆ ಕುಸ್ತಿ ಪಟು ಹಾಗೇ!
- ಅಕ್ಷಯ್ ಕಾನಿಟ್ಕರ್
'ನಾನು ಅರವಿಂದ ಕೇಜ್ರಿವಾಲ್ ಮಾತನಾಡುತ್ತಿರುವುದು' ಎಂಬ ವಾಕ್ಯವನ್ನು ನನ್ನ ಅಲಾರ್ಮ್ ಟೋನ್ ಆಗಿ ಇಟ್ಟುಕೊಂಡಿದ್ದೇನೆ. ಇದು ನನಗೆ ಕಿರಿಕಿರಿಯುಂಟು ಮಾಡಿ ನನ್ನನ್ನು ಎಬ್ಬಿಸಿ ಬಿಡುತ್ತದೆ.
- ಕೆಹ್ಕೆ ಪೆಹ್ನೋ
ಸಾಮಾನ್ಯವಾಗಿ ನಾವು ಹರ್ಯಾಣಾದಲ್ಲಿ ಹೆಣ್ಣು ಮಕ್ಕಳನ್ನು ಜನಿಸಲು ಬಿಡುವುದಿಲ್ಲ. ಬಿಟ್ಟಾಗಲೆಲ್ಲ ಅವರು ಪದಕ ಗೆದ್ದು ಬರುತ್ತಾರೆ.
- ಆರ್ಒಎಫ್ಎಲ್ ಗಾಂಧಿ
Advertisement