ರವಿ ಮಣಿಪದವು, ಪರ್ಕಳ
ಅಂದು ತೂಕಡಿಸಿ ತೂಕಡಿಸಿ ಬೀಳದಿರು ತಿಮ್ಮಾ. ಇಂದು?
ವೇಕ್ ಅಪ್ ಸಿಡ್!
ಉಜ್ಜನಿ ಜಲೇಂದ್ರ, 8971857200
ಹಾಸಿಗೆ ಇದ್ದಷ್ಟು ಕಾಲು ಚಾಚೋಣ ಅಂದ್ರೆ ನಮ್ಮನೇಲಿ ಹಾಸಿಗೇನೇ ಇಲ್ವಲ್ಲ?
ಹಾಗಾದ್ರೆ ಕಾಲು ಚಾಚುವಷ್ಟು ಹಾಸಿಗೆ ಮಾಡಿಸಿದ್ರೆ ಆಯ್ತು.
ತುರಗಲ್ಲ ಉಮೇಶ, ರಾಮದುರ್ಗ
ನನ್ನ ಗೆಳತಿ ಸುಂದರ ಮಠ ಕಟ್ಟಿಸಿದ್ದಾಳೆ. ಗುಣವಂತ ಸ್ವಾಮೀಜಿ ಬೇಕಾಗಿದ್ದಾರೆ. ದಯವಿಟ್ಟು ತಿಳಿಸಿ.
ಸದ್ಯ ಕಾಳಿ ಸ್ವಾಮಿ ಶೂಟಿಂಗ್ನಲ್ಲಿ ಬ್ಯೂಸಿ ಇದ್ದಾರೆ. ಸ್ವಲ್ಪ ದಿನಗಳ ನಂತರ ಪ್ರಯತ್ನಿಸಿ!
ಸುನಿತಾ, ಬೆಂಗಳೂರು
ಫ್ಯಾಷನ್ ಡಿಸೈನರ್ ಮಧು ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗಿದ್ದರೆ ನಡೆಯುತ್ತಿದ್ದ ಸ್ವಾರಸ್ಯಕರ ಘಟನೆಯೇನು?
ಶಕೀಲಾ ಇರೋದ್ರಿಂದ ಫ್ಯಾಷನ್ಗೇನೂ ಅವಕಾಶ ಇಲ್ಲ ಅಂತ ಮಧು ಅಲ್ಗೆ ಹೋಗಿಲ್ವಂತೆ!
-ಬಾಣಭಟ್ಟ
Advertisement