ನನ್ನ ಗೆಳತಿ ನನ್ನ ಕಾಟ ಜಾಸ್ತಿ ಅಂತ ನಿತ್ಯಾನಂದನ ಮಠ ಸೇರುತ್ತೇನೆ ಅನ್ನುತ್ತಿದ್ದಾಳಲ್ಲ?

ತುರಗಲ್ಲ ಉಮೇಶ, ರಾಮದುರ್ಗ
ನನ್ನ ಗೆಳತಿ ನನ್ನ ಕಾಟ ಜಾಸ್ತಿ ಅಂತ ನಿತ್ಯಾನಂದನ ಮಠ ಸೇರುತ್ತೇನೆ ಅನ್ನುತ್ತಿದ್ದಾಳಲ್ಲ?
ನೀನು 'ನಿತ್ಯ ಆನಂದ' ಕೊಡ್ತಿಲ್ಲ ಅಂತಾಯ್ತು!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಬೆಂಗಳೂರು ಬೇಸರವಾಗಿದ್ದರೆ ಮೈಸೂರಿಗೆ ಬಂದುಬಿಡು ಅಂತ ಕರೀತಿದ್ದಾಳಲ್ಲ?
ಹನಿಮೂನ್‌ಗೆ ಮಡಿಕೇರಿಗೆ ಹೋಗೋಕೆ ಹತ್ತಿರವಾಯ್ತು!

ಪೇಂಟರ್ ಪಾಪು, ಸಂತೇಮರಹಳ್ಳಿ, 9008877712
ನೆನಪನ್ನು ಎಂತಹ ಗುಂಡಿಯಲ್ಲಿ ಹಾಕಿ ಹೂತರೂ ಅದು ಎದ್ದು ಬಂದು ನಮ್ಮನ್ನು ಕಾಡುತ್ತೆ ಯಾಕೆ?
ನೆನಪು ಮತ್ತು ನೀರಲ್ಲಿ ಮುಳುಗಿದ ಹೆಣ ಎರಡೂ ಒಂದಲ್ಲ ಒಂದುದಿನ ಮೇಲೆದ್ದು ಬರಲೇಬೇಕು!

ರಮೇಶ್, ಹನುಮನಾಳು
ಮಾತು ಬೆಳ್ಳಿ, ಮೌನ ಬಂಗಾರ. ಇಲ್ಲೊಬ್ಬಳು ನನ್ನ ಮಾತು ಖಡ್ಗ ಎನ್ನುತ್ತಾಳೆ. ಹಾಗಾದರೆ ಮೌನ?
ಬೊಡ್ಡು!

 ಬಾಣಭಟ್ಟ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com