ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಪಾಪ ಮಾಡಿದರೆ ಪಾಪದ ಕೊಡ ತುಂಬುತ್ತೆ. ಪುಣ್ಯ ಮಾಡಿದರೆ?
ಪಾಪದ ಕೊಡ ಖಾಲಿಯಾಗುತ್ತೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಗೂಳಿ ಹತ್ರ ಹೋದ್ರೆ ಗುಮ್ಮುತ್ತೆ. ಹುಡುಗಿ ಹತ್ರ ಹೋದ್ರೆ?
ಗಮ್ಮತ್ತು!
ಮುಕುಂದ ಹೆರಕಲ್ಲ, ಗುಲ್ಬರ್ಗಾ8277672321
ವಾತ್ಸ್ಯಾಯನ ಋಷಿಯ ಹೆಸರಲ್ಲಿ ಗೋತ್ರ ಯಾಕಿಲ್ಲ?
ಅವರದ್ದು ಎಲ್ಲರಿಗೂ ಅನ್ವಯಿಸುವ 'ಸೂತ್ರ'!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಬುದ್ದಿಜೀವಿಗಳಿಗೂ ಬುದ್ದಿಗೇಡಿಗಳಿಗೂ ಇರುವ ವ್ಯತ್ಯಾಸವೇನು?
ಒಬ್ಬರು ಬುದ್ಯಾಪೂರ್ವಕ ಕೇಡುಮಾಡುವವರು, ಇನ್ನೊಬ್ಬರು ಕೇಡುಬುದ್ದಿಯವರು!
ಬಾಣಭಟ್ಟ
Advertisement