ಇದ್ದಾಗ ಬಾರದವರು ಸತ್ತಾಗ ಅಳೋದ್ಯಾಕೆ?

ರವಿಕುಮಾರ ಜಿ.ಬಿ., 9449669897
ರಾಹುಲ್ ಗಾಂಧಿಗೆ 44 ವರ್ಷವಾದರೂ ಇನ್ನೂ ಅವರನ್ನು ಯುವ ನಾಯಕ ಅಂತಾರಲ್ಲ?
ಇರುವವರಲ್ಲಿ ಅವರೇ ಯುವಕರು!


ಜಗದೀಶ ಎಸ್. ಬೆಳಗಾವಿ, 8722444410
ಇದ್ದಾಗ ಬಾರದವರು ಸತ್ತಾಗ ಅಳೋದ್ಯಾಕೆ?
ಇದ್ದಾಗ ಬರ್ಲಿಕ್ಕೆ ಆಗ್ಲಿಲ್ಲವಲ್ಲ ಅಂತ!

ಎ.ಎಚ್. ಪ್ರಕಾಶಕುಮಾರ ಶಿಕಾರಿಪುರ, 9886016328
ವಿಶ್ವೇಶ್ವರ ಭಟ್ರಿಗೂ ಯೋಗರಾಜ ಭಟ್ರಿಗೂ ಏನು ವ್ಯತ್ಯಾಸ?
ಗದ್ಯ ಮತ್ತು ಪದ್ಯದ ನಡುವೆ ಇರುವಷ್ಟೇ ವ್ಯತ್ಯಾಸ!

ವಿ. ಹೇಮಂತಕುಮಾರ, ಬೆಂಗಳೂರು, 9901739104
ಎಲ್ಲರೂ ಜಾತ್ರೆಯಲ್ಲಿ ತೇರನ್ನೇ ನೋಡುವಾಗ ಅವಳು ನನ್ನನ್ನೇ ನೋಡ್ತಿದಾಳಲ್ಲ?
ಅವರವರ ದೇವರು ಎಲ್ಲಿದ್ದಾರೋ ಅಲ್ಲೇ ನೋಡೋದು!

 ಬಾಣಭಟ್ಟ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com