ಸ್ಥಳೀಯ ದಿನಪತ್ರಿಕೆ ‘ಸುದ್ದಿ ಬಿಡುಗಡೆ’ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಇವರು ಹೇಳುವಂತೆ ಅವರಿಗೆ ಚಿನಾವಣೆಯ ಗೆಲುವಿ, ಸೋಲು ಮುಖ್ಯವಾಗಿಲ್ಲ, ಪ್ರಜಾಪ್ರಭುತ್ವದ ಮೂಲ ತತ್ವಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕು, ಇದಕ್ಕಾಗಿ ತಾವೇ ಚುನಾವಣೆಗೆ ನಿಲ್ಲುವ ಮೂಲಕ ಒಂದು ಸಂದೇಶ ರವಾನಿಸಲು ಅವರು ಬಯಸಿದ್ದಾರೆ.