ನಾನು ಸನ್ಯಾಸಿ, ನನಗೆ ಮತ ಹಾಕದಿದ್ದರೆ, ನಿಮಗೆ ಶಾಪ ಕೊಡುತ್ತೇನೆ: ಸಾಕ್ಷಿ ಮಹಾರಾಜ್

ನಾನೊಬ್ಬ ಸನ್ಯಾಸಿ. ನನಗೆ ಮತ ನೀಡಿದಿದ್ದರೆ, ನಿಮಗೆ ಶಾಪ ನೀಡುತ್ತೇನೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ...
ಸಾಕ್ಷಿ ಮಹಾರಾಜ್
ಸಾಕ್ಷಿ ಮಹಾರಾಜ್
Updated on
ಉತ್ತರ ಪ್ರದೇಶ: ನಾನೊಬ್ಬ ಸನ್ಯಾಸಿ. ನನಗೆ ಮತ ನೀಡಿದಿದ್ದರೆ, ನಿಮಗೆ ಶಾಪ ನೀಡುತ್ತೇನೆ ಎಂದು ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
'ಒಬ್ಬ ಸನ್ಯಾಸಿ ನಿಮ್ಮ ಮನೆ ಬಾಗಿಲಿಗೆ ಬಂದು ಭಿಕ್ಷೆ (ಮತ) ಬೇಡುತ್ತಿದ್ದಾನೆ. ಒಂದು ವೇಳೆ ನೀವು ಭಿಕ್ಷೆ ನೀಡಿದಿದ್ದರೆ, ಶಾಪಕ್ಕೆ ಗುರಿಯಾಗುತ್ತಿರಿ. ಇದನ್ನು ನಾನು ಹೇಳುತ್ತಿಲ್ಲ. ಇದೆಲ್ಲ ಶಾಸ್ತ್ರದಲ್ಲೇ ಇದೆ. ನಾನು ಹಣ ಅಥವಾ ಭೂಮಿ ಕೇಳಲು ನಿಮ್ಮ ಬಳಿ ಬಂದಿಲ್ತಲ, ಮತ ಕೇಳಲು ಬಂದಿದ್ದೇನೆ. ನೀವು ನನಗೆ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದರೆ, 1.5 ಕೋಟಿ ಭಾರತೀಯರ ಹಣೆಬರಹ ಬದಲಾಗಲಿದೆ' ಎಂದು ಹೇಳಿದ್ದಾರೆ. 
ಸನ್ಯಾಸಿಯಾಗಿರುವ ನಾನು, ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತಿದ್ದೇನೆ. ಚುನಾವಣೆಯಲ್ಲಿ ಸನ್ಯಾಸಿಯನ್ನು ನಿರಾಕರಿಸಿದರೆ, ನಿಮ್ಮ ಕುಟುಂಬದ ಸುಖ ಸಂತೋಷವನ್ನು ತೆಗೆದುಕೊಂಡು, ಶಾಪ ನೀಡಿ ಹೋಗುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 
ಈ ಸಂಬಂಧ ಶ್ರೀರಾಮುಲು ಪೊಲೀಸ್ ಠಾಣೆಯಲ್ಲಿ ಸಂಸದ ಸಾಕ್ಷಿ ಮಹಾರಾಜ್ ವಿರುದ್ಧ ದೂರು ದಾಖಲಾಗಿದೆ ಎಂದು ಸಿಟಿ ಮ್ಯಾಜಿಸ್ಟ್ರೇಟ್ ರಾಕೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com