ಬಿಜೆಪಿ ನನ್ನ ಹತ್ಯೆಗೆ ಯತ್ನಿಸುತ್ತಿದೆ- ಹಾರ್ದಿಕ್ ಪಟೇಲ್ ಆರೋಪ

ಬಿಜೆಪಿ ನನ್ನ ಹತ್ಯೆಗೆ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ. ಸುರೇಂದ್ರನಗರದಲ್ಲಿ ಜನಾಕ್ರೋಶದ ಸಮಾವೇಶದಲ್ಲಿ ವ್ಯಕ್ತಿಯೊಬ್ಬರು ಹಾರ್ದಿಕ್ ಪಟೇಲ್ ಕಪಾಳ ಮೊಕ್ಷ ಮಾಡಿದ ನಂತರ ಹಾರ್ದಿಕ್ ಪಟೇಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Updated on

ರಾಜ್ ಕೋಟ್ :  ಬಿಜೆಪಿ ನನ್ನ  ಹತ್ಯೆಗೆ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ. ಸುರೇಂದ್ರನಗರದಲ್ಲಿ ಜನಾಕ್ರೋಶದ ಸಮಾವೇಶದಲ್ಲಿ ವ್ಯಕ್ತಿಯೊಬ್ಬರು ಹಾರ್ದಿಕ್ ಪಟೇಲ್  ಕಪಾಳ ಮೊಕ್ಷ ಮಾಡಿದ ನಂತರ  ಹಾರ್ದಿಕ್ ಪಟೇಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಾರ್ದಿಕ್ ಪಟೇಲ್,  ಹರೇನ್ ಪಾಂಡ್ಯ ಹತ್ಯೆ ಮಾಡಿದ ರೀತಿಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ನನ್ನ ಮೇಲೆ ದಾಳಿಗೆ ಯತ್ನಿಸುತ್ತಿದೆ. ದಾಳಿ ಮಾಡಿದ ವ್ಯಕ್ತಿ ಬಿಜೆಪಿ ಅಭ್ಯರ್ಥಿಯಾಗಿದ್ದಾನೆ. ಆತನ ಫೇಸ್ ಬುಕ್ ಪ್ರೊಪೈಲ್ ನಲ್ಲಿ ಇದನ್ನು ಗಮನಿಸಬಹುದು ಎಂದು ಹೇಳಿದರು.

ಹಾರ್ದಿಕ್ ಪಟೇಲ್ ಗೆ ಕಪಾಳ ಮೋಕ್ಷ ಮಾಡಿದ್ದ ವ್ಯಕ್ತಿಯ ಹೆಸರು ತರುಣ್  ಗಜ್ಜರ್ . ಆತ  ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲದ್ದ ಸಾಮಾನ್ಯ ಪ್ರಜೆ ಎಂದು ಸುರೇಂದ್ರನಗರ್ ಪೊಲೀಸ್ ಸೂಪರಿಟೆಂಡೆಂಟ್  ಮಹೇಂದ್ರ ಬಾಗೇಡಿಯಾ ತಿಳಿಸಿದ್ದಾರೆ.ತರುಣ್ ಗಜ್ಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಬಾಗೇಡಿಯಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com