ಇಂದು ಲಕ್ನೊದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಇದುವರೆಗಿನ ಹಂತಗಳ ಮತದಾನದಲ್ಲಿ ಬಿಜೆಪಿ ಹಿಂದೆ ಬಿದ್ದಿದೆ ಎಂದು ಗೊತ್ತಾದ ಬಳಿಕ ಪ್ರಧಾನ ಮಂತ್ರಿಯವರ ಭಾಷೆಯೇ ಬದಲಾಗಿದೆ. ಬಿಜೆಪಿಗೆ ಇಂದು ಬೇರೆ ಮಾರ್ಗವೇ ಇಲ್ಲದಾಗಿದೆ. ಪ್ರಧಾನಿಯಿಂದ ಹಿಡಿದ ಬಿಜೆಪಿಯ ಯಾವುದೇ ನಾಯಕರು ದೇಶದ ಅಭಿವೃದ್ಧಿ, ರೈತರ ಆದಾಯಗಳ ಬಗ್ಗೆ ಮಾತನಾಡುವುದಿಲ್ಲ. ಮೋದಿಯವರು ದೇಶದ ಜನರನ್ನು ಹಾದಿ ತಪ್ಪಿಸಲು ಬಯಸುತ್ತಿದ್ದಾರೆ.