ನವದೆಹಲಿ:ಲೋಕಸಭಾ ಚುನಾವಣೆಗಾಗಿ ಟಿಕೆಟ್ ಖರೀದಿ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯಲು ತಮ್ಮ ತಂದೆ 6 ಕೋಟಿ ರೂ. ಹಣವನ್ನು ನೀಡಿದ್ದಾರೆ ಎಂದು ಪಶ್ಚಿಮ ದೆಹಲಿ ಎಎಪಿ ಅಭ್ಯರ್ಥಿ ಬಲ್ ಬೀರ್ ಸಿಂಗ್ ಜಖಾರ್ ನ ಮಗ ಆರೋಪಿಸಿದ್ದಾನೆ.
1984ರ ಸಿಖ್ ವಿರೋಧಿ ದಂಗೆಯಲ್ಲಿ ಆರೋಪಿಯಾಗಿರುವ ಸಜ್ಜನ್ ಕುಮಾರ್ ಜೊತೆಗೂ ಸಂಪರ್ಕ ಇರುವುದಾಗಿ ಆತ ಹೇಳಿಕೆ ನೀಡಿದ್ದು, ಇದೊಂದು ಗಂಭೀರ ವಿಚಾರವಾಗಿದೆ. ಇದಕ್ಕೆ ಕೇಜ್ರಿವಾಲ್ ಉತ್ತರ ನೀಡಬೇಕೆಂದು ಸಚಿವ ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದಾರೆ.