ಕೇಂದ್ರದಲ್ಲಿ ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ: ವೈಎಸ್ ಆರ್ ಪಿ; ಏನದು ಷರತ್ತು?

2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ...
ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ-ವೈಎಸ್ ಆರ್ ಪಿ, ಏನದು ಷರತ್ತು?
ಯಾರನ್ನೂ ಬೆಂಬಲಿಸಲು ಸಿದ್ಧ, ಆದರೆ ಷರತ್ತು ಅನ್ವಯ-ವೈಎಸ್ ಆರ್ ಪಿ, ಏನದು ಷರತ್ತು?
Updated on
ನವದೆಹಲಿ: 2019 ರ ಲೋಕಸಭಾ ಚುನಾವಣೆ ಫಲಿತಾಂಶ ಮೇ.23 ರಂದು ಪ್ರಕಟಗೊಳ್ಳಲಿದ್ದು, ಒಂದು ವೇಳೆ ಅತಂತ್ರ ಸಂಸತ್ ಎದುರಾದರೆ ಸರ್ಕಾರ ರಚನೆಯಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕತ್ವ ಮಹತ್ವದ ಪಾತ್ರ ನಿರ್ವಹಿಸಲಿದೆ. ಈ ಪೈಕಿ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ್ ರೆಡ್ಡಿ ಅವರೂ ಒಬ್ಬರು. 
ಈ ನಡುವೆ ಅಂದಿಕೊಂಡಂತೆಯೇ ಕೇಂದ್ರದಲ್ಲಿ ಅತಂತ್ರ ಫಲಿತಾಂಶ ಬಂದರೆ ತಾವು ಯಾರನ್ನು ಬೇಕಾದರೂ ಬೆಂಬಲಿಸಲು ಸಿದ್ಧವಿರುವುದಾಗಿ ವೈಎಸ್ ಆರ್ ಕಾಂಗ್ರೆಸ್  ಪಕ್ಷ ಹೇಳಿದೆ. 
ಆದರೆ ಬೆಂಬಲ ನೀಡುವುದಕ್ಕೆ ವೈಎಸ್ ಆರ್ ಕಾಂಗ್ರೆಸ್ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಈ ವರೆಗೂ ಯಾವುದೇ ಮೈತ್ರಿಕೂಟದೊಂದಿಗೂ ಗುರುತಿಸಿಕೊಳ್ಳದ ವೈಎಸ್ ಆರ್ ಕಾಂಗ್ರೆಸ್, ಆಂಧ್ರಪ್ರದೇಶಕ್ಕೆ ಯಾರು ವಿಶೇಷ ಸ್ಥಾನ-ಮಾನ ನೀಡುತ್ತಾರೋ ಅವರಿಗೆ ಸರ್ಕಾರ ರಚನೆಗೆ ಬೆಂಬಲ ಘೋಷಿಸುವುದಾಗಿ ವೈಎಸ್ ಆರ್ ನ ಹಿರಿಯ ನಾಯಕ ಮೆಕಪತಿ ರಾಜಮೋಹನ್ ರೆಡ್ಡಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com