ಅಂತೆಯೇ ತನ್ನ ನಿಲುವನ್ನು ಸಮರ್ಥಿಸಿಕೊಂಡಿರುವ ಆಯೋಗ, ಮತ ಎಣಿಕೆ ಕಾರ್ಯದ ವೇಳೆ ಆಯಾ ಪಕ್ಷಗಳು ಏಜೆಂಟರುಗಳು, ಅಭ್ಯರ್ಥಿಗಳು ಇರುತ್ತಾರೆ. ಮತಎಣಿಕೆ ಕಾರ್ಯಕ್ಕಾಗಿ ಅಧಿಕಾರಿಗಳಿಗೆ ಈಗಾಗಲೇ ಸಲಹೆ ಮತ್ತು ಸೂಚನೆ ನೀಡಲಾಗಿದ್ದು, ಅದಿಕಾರಿಗಳಿಗೆ ಮತ ಎಣಿಕೆ ಕುರಿತಂತೆ ತರಬೇತಿ ಕೂಡ ನೀಡಲಾಗಿದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಮತಎಣಿಕೆ ಪ್ರಕ್ರಿಯೆಯನ್ನು ಬದಲಿಸುವುದು ತಾಂತ್ರಿಕವಾಗಿ ಅಸಾಧ್ಯ. ಇದೇ ಕಾರಣಕ್ಕೆ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದೆ.