ರಾಹುಲ್ ಗಾಂಧಿ ಅವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನಂತರ ಮುಂದಿನ ವಾರ ಹಾಜರಾಗುವಂತೆ, ಕೋರ್ಟ್ ಸೂಚನೆನೀಡಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ರಾಹುಲ್ ಗಾಂಧಿ ಬಿಹಾರದಲ್ಲಿ ಚೌಕಿದಾರ್ ಛೋರ್ ಹೈ ಎಂದು ಹೇಳಿಕೆ ನೀಡಿದ್ದರು.ಈ ಆಧಾರದಮೇಲೆ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರಿಂದ ವಿವರಣೆ ಕೇಳಿತ್ತು ಎಂದು ಸಿಂಘ್ವಿ ಉತ್ತರಿಸಿದರು. ರಾಜಕೀಯ ಘೋಷಣೆಯನ್ನು, ಪ್ರಚಾರಕ್ಕಾಗಿ ಮುಂದೆಯೂ ಬಳಸಲಾಗುವುದು ಎಂದು ತಮ್ಮ ವಿವರಣೆಯಲ್ಲಿ ರಾಹುಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ನ್ಯಾಯಾಲಯ ತೀರ್ಪನ್ನು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ಹೊಂದಿರಲಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದರು.