ಭೂಪಾಲ್ : ಮೂರು ದಿನ ಪ್ರಚಾರ ನಡೆಸದಂತೆ ಚುನಾವಣಾ ಆಯೋಗದ ನಿರ್ಬಂಧದ ನಡುವೆಯೂ ಪ್ರಚಾರ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಈ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಪ್ರಗ್ಯಾ ಸಿಂಗ್ ಠಾಕೂರ್, ನಾನೊಬ್ಬಳು ಸನ್ಯಾಸಿನಿ, ಆಧ್ಯಾತ್ಮಿಕತೆ, ಭಾರತದ ಸಂಸ್ಕೃತಿಯ ಸಂಕೇತ ಹಾಗೂ ಮೌಲ್ಯಗಳಿಂದ ನನ್ನ ಜೀವನ ಕೂಡಿದೆ. ಇವುಗಳನ್ನು ತಡೆಯಲು ಕೆಲವರು ಪ್ರಯತ್ನಿಸಿದರೆ, ನಾನು ಅವರ ಬುದ್ದಿವಂತಿಕೆಗೆ ಇದನ್ನು ಬಿಡುತ್ತೇನೆ ಎಂದು ಹೇಳಿದ್ದಾರೆ.
Advertisement