'ಪ್ರೀತಿ ಗೆಲ್ಲುತ್ತದೆ, ದ್ವೇಷ ಅಲ್ಲ': ಮತ ಚಲಾಯಿಸಿದ ರಾಹುಲ್ ಗಾಂಧಿ ಪ್ರತಿಕ್ರಿಯೆ

ಲೋಕಸಭೆ ಚುನಾವಣೆಯ 6ನೇ ಹಂತದ ಚುನಾವಣೆ ಭಾನುವಾರ ನಡೆಯುತ್ತಿದ್ದು ದೆಹಲಿಯಲ್ಲಿ ಮತ ...
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ
ನವದೆಹಲಿ: ಲೋಕಸಭೆ ಚುನಾವಣೆಯ 6ನೇ ಹಂತದ ಚುನಾವಣೆ ಭಾನುವಾರ ನಡೆಯುತ್ತಿದ್ದು ದೆಹಲಿಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ದ್ವೇಷದಿಂದ ಜನರ ಮತಗಳಿಸಲು ನೋಡುತ್ತಿದ್ದರೆ ನಾವು ಪ್ರೀತಿಸುತ್ತೇವೆ. ಇಲ್ಲಿ ಪ್ರೀತಿ ಗೆಲ್ಲುತ್ತದೆ ಎಂದರು.
ದೆಹಲಿಯ ಔರಂಗಾಜೇಬ್ ಲೇನ್ ನ ಶಾಲೆಯಲ್ಲಿ ಮತ ಚಲಾಯಿಸಿದ ಮೋದಿ, ಚುನಾವಣಾ ರ್ಯಾಲಿ ಭಾಷಣಗಳಲ್ಲಿ ಪ್ರಧಾನಿ ಮೋದಿ ದ್ವೇಷ ತುಂಬಿದರೆ ನಾವು ಪ್ರೀತಿ ತುಂಬುತ್ತೇವೆ, ಇಲ್ಲಿ ದ್ವೇಷದ ವಿರುದ್ಧ ಪ್ರೀತಿ ಗೆಲ್ಲುತ್ತದೆ ಎಂದರು.
ಈ ಬಾರಿಯ ರಾಷ್ಟ್ರ ಚುನಾವಣೆಯಲ್ಲಿ ನಾಲ್ಕು ಮುಖ್ಯ ವಿಷಯಗಳ ಮೇಲೆ ಜನರು ತೀರ್ಮಾನ ಮಾಡುತ್ತಾರೆ, ಅದು ನಿರುದ್ಯೋಗ ಸಮಸ್ಯೆ, ನೋಟುಗಳ ಅಪನಗದೀಕರಣ, ರೈತರ ಸಮಸ್ಯೆಗಳು ಮತ್ತು ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಆದ ಭ್ರಷ್ಟಾಚಾರ ಎಂದು ರಾಹುಲ್ ಗಾಂಧಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com