ಬಿಹಾರ ರೈಲು ಅವಘಡ: ಕಪ್ಲಿಂಗ್ ತುಂಡಾಗಿ ಪ್ರತ್ಯೇಕಗೊಂಡ ಬೋಗಿಗಳು

ದೆಹಲಿಯಿಂದ ಇಸ್ಲಾಮ್ ಪುರಕ್ಕೆ ರೈಲು ಸಂಚಾರಿಸುತ್ತಿತ್ತು. ಟ್ವಿನಿ ಗಂಜ್ ಹಾಗೂ ರಘುನಾಥಾಪುರ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Magadh Express splits into two near Bihars Buxar
ಬಿಹಾರದಲ್ಲಿ ಮಗಧ ಎಕ್ಸ್ ಪ್ರೆಸ್ ರೈಲು ಅವಘಡ
Updated on

ಪಾಟ್ನಾ: ಬಿಹಾರದಲ್ಲಿ ಮಗಧ ಎಕ್ಸ್ ಪ್ರೆಸ್ ರೈಲು ಅವಘಡ ಸಂಭವಿಸಿದ್ದು ಕಪ್ ಲಿಂಗ್ ತುಂಡಾದ ಪರಿಣಾಮ ಬೋಗಿಗಳು ಪ್ರತ್ಯೇಕಗೊಂಡಿರುವ ಘಟನೆ ಭಾನುವಾರ ನಡೆದಿದೆ.

ದೆಹಲಿಯಿಂದ ಇಸ್ಲಾಮ್ ಪುರಕ್ಕೆ ರೈಲು ಸಂಚಾರಿಸುತ್ತಿತ್ತು. ಟ್ವಿನಿ ಗಂಜ್ ಹಾಗೂ ರಘುನಾಥಾಪುರ ನಿಲ್ದಾಣಗಳ ನಡುವೆ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಕೋಚ್ ನಂ. S-7 ಇಂಜಿನ್ ನಿಂದ 13ನೇ ಬೋಗಿ, s-16 14 ನೇ ಬೋಗಿಗಳು ಪ್ರತೇಕಗೊಂಡಿವೆ ಎಂದು ಹೇಳಿದ್ದಾರೆ.

Magadh Express splits into two near Bihars Buxar
ಉಪನಗರ ರೈಲು ಯೋಜನೆ: K-RIDE ಗೆ ಹೆಚ್ಚಿನ ತಾಂತ್ರಿಕ ಸಾಮರ್ಥ್ಯದ ಅಗತ್ಯವಿದೆ- ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಘಟನೆ ನಡೆದ ಕೂಡಲೇ ಸ್ಥಳಕ್ಕೆ ತಾಂತ್ರಿಕ ತಂಡಗಳು ಆಗಮಿಸಿ ದುರಸ್ತಿ ಕಾಮಗಾರಿಯಲ್ಲಿ ನಿರತವಾಗಿವೆ ಎಂದು cpro ತಿಳಿಸಿದ್ದಾರೆ.

ಈ ಅವಘಡ ರೈಲ್ವೆ ಟ್ರಾಫಿಕ್ ಮೇಲೆ ಪರಿಣಾಮ ಉಂಟು ಮಾಡಿದ್ದು ರೈಲುಗಳ ಸಂಚಾರ ವ್ಯತ್ಯಯವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com