ಆಮ್ ಆದ್ಮಿ ಪಕ್ಷ, ಸರ್ವೋದಯ ಕರ್ನಾಟಕ, ಸ್ವರಾಜ್ ಇಂಡಿಯಾ, ಕಮ್ಯೂನಿಸ್ಟ್ ಪಕ್ಷ, ಕನ್ನಡ ಚಳುವಳಿ ವಾಟಾಳ್ ಪಕ್ಷ, ಮತ್ತಿತರರ ಪಕ್ಷಗಳು ದೂರವೇ ಉಳಿದಿವೆ, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಈ ವೇಳೆ ಮಧ್ಯಮವರ್ಗ, ಹಾಗೂ ನಗರದ ವಿದ್ಯಾವಂತ ಮತದಾರರನ್ನು ಸೆಳೆದಿತ್ತು, ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಪಕ್ಷ ವಿಭಜನೆಯಿಂದಾಗಿ ಎಎಪಿ ಈ ಬಾರಿಯ ಚುನಾವಣೆಯಲ್ಲಿ ರಿಸ್ಕ್ ತೆಗೆದುಕೊಳ್ಳದೇ ಇರಲು ನಿರ್ಧರಿಸಿದೆ.