2018ರ ವಿಧಾನಸಭೆ ಚುನಾವಣೆಯಲ್ಲಿ ಭಿನ್ನವಾಗಿ, ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ತಮ್ಮ ದೀರ್ಘ ಪ್ರಚಾರದ ಜಂಜಡದ ನಡುವೆಯೇ ಒಂದಲ್ಲಾ ಒಂದು ಮಠಕ್ಕೆ ಭೇಟಿ ಕೊಟ್ಟಿದ್ದರು. ಆದರೆ ಈ ಬಾರಿ ಅಂತಹಾ ಯಾವುದೇ ಮಠಗಳ ಭೇಟಿ ಅಥವಾ ಆಶೀರ್ವಾದ ಪಡೆಯುವ ಕ್ರಿಯೆ ಇದುವರೆಗೆ ಎಲ್ಲಿಯೂ ಕಾಣಿಸಿಲ್ಲ.ಕೆಲವು ಕೇಂದ್ರ ಮತ್ತು ರಾಜ್ಯ ನಾಯಕರು, ದಕ್ಷಿಣ ಕರ್ನಾಟಕದ ಮ್ರಾಜಕೀಯ ಮುಖಂಡರು ಶೃಂಗೇರಿ, ಪೇಜಾವರ, ತುಮಕೂರು, ಸುತ್ತೂರು, ಆದಿಚುಂಚುನಗಿರಿ, ಮುರುಗರಾಜೇಂದ್ರ ಮತ್ತು ಇತರೆ ಮಠಾಧಿಪತಿಗಳ ಆಶೀರ್ವಾದ ಕೋರಿದ್ದಾರೆ. ಆದರೆ ಇಲ್ಲೆಲ್ಲಾ ಯಾವುದೇ ಆಡಂಬರ, ಪ್ರಚಾರಗಳು ಕಾಣೆಸಿಲ್ಲ.