ಭಾರತದಲ್ಲಿ ಮೋದಿ ಬಹುದೊಡ್ಡ ವಿಷಯವಾಗಿದೆ, ನಾನು ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಕಾಂಗ್ರೆಸ್ ಮತದಾರರು ನನಗೆ ಮತಹಾಕುತ್ತಾರೆ, ನಾನು ಈ ಮೊದಲು ಕಾಂಗ್ರೆಸ್ ನಲ್ಲಿದ್ದೆ ಎಂಬುದನ್ನು ಅವರು ಪರಿಗಣಿಸುತ್ತಾರೆ. ನಾನು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಜನರ ಅಭಿಪ್ರಾಯ ಪಡೆದಿದ್ದೇನೆ, ಬಿಜೆಪಿ ಸೇರಿ ಚುನಾವಣೆಗೆ ನಿಲ್ಲುವ ಬಗ್ಗೆ ಅವರ ಸಲಹೆ ಪಡೆದಿದ್ದೇನೆ, ತಮ್ಮ ಬೆಂಬಲ ನೀಡುವುದಾಗಿ ಜನ ನನಗೆ ತಿಳಿಸಿದ್ದಾರೆ, ಮಂಡ್ಯ ಉಪ ಚುನಾವಣೆಯಿಂದಲೇ ನಾನು ಕೆಲಸ ಆರಂಭಿಸಿದ್ದೇನೆ, ಕಾಂಗ್ರೆಸ್ ಅಂತಿಮವಾಗಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಡುತ್ತದೆ ಎಂದು ನನಗೆ ಗೊತ್ತಿತ್ತು.