ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಲೆಕುಡಿಯ ಗ್ರಾಮಸ್ಥರಿಗೆ ವಿದ್ಯುತ್ ಒದಗಿಸಿಕೊಡುವುದಾಗಿ ಹೇಳುತ್ತಾರೆ, ಹಾಗಾದರೆ ನಮ್ಮ ಕ್ಷೇತ್ರದ ಶಾಸಕರು, ಸಂಸದರಿಗೆ ಏಕೆ ಸಾಧ್ಯವಾಗುವುದಿಲ್ಲ, ಇದು ಅರಣ್ಯ ಪ್ರದೇಶವಾಗಿರುವುದರಿಂದ ಇತಿಮಿತಿಗಳಿವೆ, ಆದರೆ ಮನಸ್ಸಿದ್ದರೆ ಎಲ್ಲದಕ್ಕೂ ಮಾರ್ಗವಿದೆ, ಜನಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಕೃಷ್ಣಪ್ಪ ಮಲೆಕುಡಿ.