ಚಿತ್ರರಂಗದ ಖ್ಯಾತ ನಟರಾದ ದರ್ಶನ್ ಹಾಗೂ ಯಶ್ ಬೆಂಬಲ ಪಡೆದ ಪಕ್ಷೇತರ ಅಭ್ಯರ್ಥಿ ಸುಮಲತಾ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜಕುಮಾರ್ ಅವರಿಗಿಂತ ದೊಡ್ಡ ನಟ ಬೇರೆ ಯಾರೂ ಇಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರ ಗೆಲ್ಲುವುದಕ್ಕೂ ಮುನ್ನ ಅದೇ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ರಾಜಕುಮಾರ್ ಅವರನ್ನು ಆಹ್ವಾನಿಸಿದ್ದೆವು. ಆದರೆ, ಅದಕ್ಕೆ ರಾಜಕುಮಾರ್ ನಿರಾಕರಿಸಿದ್ದರು. ಮಂಡ್ಯದ ಜನರು ಅನೇಕ ಬಾರಿ ನಟರನ್ನು ಗೆಲ್ಲಿಸಿದ್ದಾರೆ. ಆದರೆ, ಮಂಡ್ಯದ ಜನರಿಗೆ ಇದರಿಂದ ಏಷ್ಟು ಲಾಭವಾಗಿದೆ ದೇವೇಗೌಡ ಪ್ರಶ್ನಿಸಿದರು.