ಜೆಡಿಎಸ್ ನಾಯಕರು, ಶಾಸಕರು ಕಾಂಗ್ರೆಸ್ ಶಾಸಕರು ಅನುಮೋದಿಸಿದ್ದ ಟೆಂಡರ್ ಗಳನ್ನು ರದ್ದು ಂಆಡಿದ್ದಾಎ.ಅನುದಾನವನ್ನು ಬಳಸದೆ ಹಿಂತಿರುಗಿಸಿದ್ದಾರೆ. ನಾಗಮಂಗಲ, ಶೀರಂಗಪಟ್ಟಣ, ಮಳವಳ್ಳಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಇಂತಹಾ ಘರ್ಷಣೆಗಳು ತಲೆದೋರಿದೆ. ಮಂಡ್ಯ ಜಿಲ್ಲೆಯ ಎನ್.ಚಲುವರಾಯಸ್ವಾಮಿ ಮತ್ತು ಇತರರು ಸೇರಿದಂತೆ ಪ್ರಮುಖ ನಾಯಕರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಪರಮೇಶ್ವರ ವರಲ್ಲಿ ಈ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಹಾಸನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹ ಇದೇ ಸಂಘರ್ಷವಿದ್ದು ಅವರು ಸಹ ಸಿದ್ದರಾಮಯ್ಯನವರಲ್ಲಿ ದೂರಿತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಈ ಸಮಸ್ಯೆಗ ಪರಿಹಾರ ಹುಡುಕಿಕೊಳ್ಳುವಲ್ಲಿ ಕಾಂಗ್ರೆಸ್ ಪಾಳಯ ವಿಫಲವಾಗಿದೆ.ಎರಡು ಪಕ್ಷಗಳ ಕಾರ್ಯಕರ್ತರ ನಡುವಿನ ಸಾಮರಸ್ಯವನ್ನು ಸುಧಾರಿಸುವಲ್ಲಿ ಯಶಸು ಕಾಣದೆ ಹೋಗಿದೆ.ಳೀಯ ಸಹಕಾರ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಈ ಹಿಂದೆ ಎರಡೂ ಪಕ್ಷಗಳು ಪರಸ್ಪರ ವಿರುದ್ಧವಾಗಿ ಹೋರಾಟ ನಡೆಸಿದೆ. ಆದರೆ ಈಗ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ನೊಡನೆ ಸಂಧಾನ ಮಾಡಿಕೊಳ್ಳುವುದು ಆ ಪಕ್ಷದ ದುರ್ಬಲತೆಗೆ ಕಾರಣವಾಗಲಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.