ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಅವರ ಕುಟುಂಬದವರು ಜಯನಗರ ಬಿಇಎಸ್ ಕಾಲೇಜಿಗೆ ಬಂದು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ದಯವಿಟ್ಟು ನಿಮ್ಮ ಮತವನ್ನು ಚಲಾಯಿಸಿ. ವೋಟ್ ಮಾಡುವ ಮೂಲಕ ನಿಮ್ಮ ನಾಯಕರನ್ನೂ ನೀವು ಆಯ್ಕೆ ಮಾಡಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ಕೊಡಿ ಎಂದು ಭಾರತದ ಎಲ್ಲ ಪ್ರಜೆಗಳಲ್ಲೂ ನನ್ನದೊಂದು ವಿನಂತಿ ಎಂದರು.