ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ಚುನಾವಣೆ ಎದುರಿಸಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದರು. ಸುಮಲತಾ ಬೆಂಬಲಿಗರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್, ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ನಮ್ಮ ಕುಟುಂಬದ ರಾಜಕೀಯದ ಇತಿಹಾಸದಲ್ಲಿ ದ್ವೇಷದ ರಾಜಕಾರಣ ನಮ್ಮ ಕುಟುಂಬ ಮಾಡಿಲ್ಲ. ಇಷ್ಟು ಬಿಟ್ಟು ಅವರ ಮಾತಿಗೆ ಹಿಂದೆಯೂ ಪ್ರತಿಕ್ರಿಯಿಸಿಲ್ಲ. ಮುಂದೆಯೂ ಪ್ರತಿಕ್ರಿಯಿಸಲ್ಲ. ನಮ್ಮ ತಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ಅವರಿಗೆ ಬೇರೆ ಸಾಕಷ್ಟು ಕೆಲಸಗಳಿವೆ. ಒಬ್ಬರ ಮೇಲೆ ಟಾರ್ಗೆಟ್ ಮಾಡಿ ಕುಳಿತುಕೊಳ್ಳಲು ಅವರಿಗೆ ಸಮಯವಿಲ್ಲ. ನಾನು ಗೆದ್ದರೂ, ಸೋತರೂ ಮಂಡ್ಯದಲ್ಲಿಯೇ ಇರುತ್ತೇನೆ, ಇಲ್ಲಿಯೇ ಜಮೀನು ಖರೀದಿಸುತ್ತೇನೆ ಎಂದರು.