ತೇಜಸ್ವಿನಿ ಅನಂತ್ ಕುಮಾರ್ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆ ಕೆಲಸದಲ್ಲಿ ಅವರಿಗೆ ಖುಷಿಯಿದೆ, ತೃಪ್ತಿಯಿದೆ, ಹೀಗಾಗಿ ರಾಜಕೀಯಕ್ಕೆ ಬರುವ ಅನಿವಾರ್ಯತೆಯೇನು ಅವರಿಗಿಲ್ಲ. ಹೀಗಾಗಿ ಅವರಿಗೆ ರಾಜಕೀಯ ಹೊಂದಿಕೆಯಾಗುತ್ತದೆಯೇ ಎಂಬುದು ಇನ್ನೊಂದು ಕಾರಣ ಕೂಡ ಅವರಿಗೆ ಟಿಕೆಟ್ ಕೈತಪ್ಪಲು ಕಾರಣವಾಗಿರಬಹುದು ಎಂದು ಅಭ್ಯರ್ಥಿಗಳ ಪಟ್ಟಿಯನ್ನು ಅಖೈರುಗೊಳಿಸಿದವರಲ್ಲಿ ಇದ್ದ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳುತ್ತಾರೆ.