ದೇವೇಗೌಡರ ಪರ ಪ್ರಚಾರ ಮಾಡುವ ಸಂಬಂಧ ಎರಡು ಪಕ್ಷಗಳು ಸಭೆ ನಡೆಸಿದ್ದು, ಪರಮೇಶ್ವರ್ ಮತ್ತು ಸಚಿವ ಎಸ್.ಆರ್ ಶ್ರೀನಿವಾಸ್ ತುಮಕೂರಿನ ಎಲ್ಲಾ 8 ಕ್ಷೇತ್ರಗಳಲ್ಲೂ ಎರಡು ಪಕ್ಷದ ಕಾರ್ಯಕರ್ತರು ಸಭೆ ನಡೆಸಲು ನಿರ್ಧರಿಸಿದ್ದಾರೆ, ಎಪ್ರಿಲ್ 1 ರಿಂದ ಎರಡು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪ್ರಚಾರ ಕೈಗೊಳ್ಳಲಿದ್ದಾರೆ, ದೇವೇಗೌಡರು ಪ್ರಚಾರಕ್ಕೆ ಬಂದಾಗ ಯಾವುದೇ ರೀತಿಯ ಮುಜುಗರ ಉಂಟಾಗದಂತೆ ತಡೆಯಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ.