ರಾಜ್ಯ ಬಿಜೆಪಿ ಘಟಕದ ನಾಯಕರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಈ ಕುರಿತು ಮಾಹಿತಿ ನೀಡಿ, ಬೇರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ನಡೆಸಲು ತೇಜಸ್ವಿ ಸೂರ್ಯ ಹೊರತುಪಡಿಸಿ ಬೇರಾವ ನಾಯಕರನ್ನು ಕೂಡ ನಿಯೋಜಿಸಿಲ್ಲ. ದೆಹಲಿ ಮತ್ತು ಭೋಪಾಲ್ ನಲ್ಲಿ ಪ್ರಚಾರ ನಡೆಸಲು ತೇಜಸ್ವಿ ಸೂರ್ಯ ಅವರನ್ನು ಕೇಂದ್ರ ಸಮನ್ವಯ ಸಮಿತಿ ನೇರವಾಗಿ ಆಯ್ಕೆ ಮಾಡಿರಬೇಕು ಎಂದು ಹೇಳಿದರು.