ಮಂಡ್ಯ: ಲೋಕಸಭಾ ಚುನಾವಣೆ ಆರಂಭದಿಂದಲೂ ರಾಷ್ಟ್ರಮಟ್ಟದಲ್ಲಿ ತೀವ್ರ ಸುದ್ದಿಯಾಗುತ್ತಿದ್ದ ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ ತಾರಕಕ್ಕೇರಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಈ ಕ್ಷೇತ್ರದಲ್ಲಿ ನೇರಾ ಹಣಾಹಣಿ ಏರ್ಪಟ್ಟಿದ್ದರಿಂದ ಬೆಟ್ಟಿಂಗ್ ಕೂಡಾ ಜೋರಾಗಿ ನಡೆಯುತ್ತಿದೆ. ಚುನಾವಣೆ ನಂತರ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಚುನಾವಣೋತ್ತರ ಸಮೀಕ್ಷೆ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ. ಚುನಾವಣೆ ನಂತರ 3 ಸಾವಿರದಿಂದ 30 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕೆಲವರು ತಮ್ಮ ಕೃಷಿ ಭೂಮಿ, ಪ್ಲಾಟ್, ಮನೆ, ದ್ವಿಚಕ್ರವಾಹನ, ಕಾರುಗಳ ಮೇಲೆಯೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
ಆರಂಭದಲ್ಲಿ ಕೆಲವರು ಸುಮಲತಾ ಪರ 1 ಲಕ್ಷ ಕಟ್ಟುತ್ತಿದ್ದರೆ ನಿಖಿಲ್ ಪರ 80, 70 ಸಾವಿರ ಕಟ್ಟುತ್ತಿದ್ದರು. ಈಗ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ. ಸುಮಲತಾ ಪರ 1 ಲಕ್ಷ ಕಟ್ಟಿದ್ದರೆ, ನಿಖಿಲ್ ಪರವಾಗಿ 1 ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.
Advertisement