ಇಂದು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಗಳಿಗೆ ಸೋಲಾಗಿರುವುದು, ಒಂದು ವರ್ಷದ ಆಡಳಿತಕ್ಕೆ ಜನರು ನೀಡಿದ ಚಾಟಿಯೇಟಾಗಿದೆ. ಇನ್ನು ನಾಲ್ಕು ವರ್ಷ ಉತ್ತಮ ಕೆಲಸ ಮಾಡಿ ಅನ್ನುವ ಉತ್ತರ ಇದಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿದ್ದು ಐದು ವರ್ಷ ಪೂರೈಸಲಿದೆ ಎಂಬ ವಿಶ್ವಾಸವಿದೆ ಎಂದರು.