ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಅದಕ್ಕೆ ಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ದನಿಯಾ ಹಾಕಿ ಚೆನ್ನಾಗಿ ಹುರಿದು ಜಾರ್ ಹಾಕಿಕೊಳ್ಳಬೇಕು. ಇದೇ ಬಾಣಲೆಯಲ್ಲಿಯೇ ತೆಂಗಿನ ತುರಿ. ಈರುಳ್ಳು, ಬೆಳ್ಳುಳ್ಳು ಹಾಕಿ ಕೆಂಪಗೆ ಹುರಿದು, ಅರಿಶಿನದ ಪುಡಿಯೊಂದಿಗೆ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಗೂ ತುಪ್ಪವನ್ನು ಹಾಕಿ ಕಾದ ನಂತರ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಚೆನ್ನಾಗಿ ತೊಳೆದ ಕೋಳಿ ಮಾಂಸ ಹಾಗೂ ಉಪ್ಪು ಹಾಕಿ 10 ನಿಮಿಷ ಬೇಯಿಸಿಕೊಳ್ಳಬೇಕು.
ಮಾಂಸ ಬೆಂದ ಬಳಿಕ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಬಿಡಬೇಕು. ನಂತರ ತೆಂಗಿನ ಹಾಲು ಹಾಕಿ 5 ನಿಮಿಷ ಕುದಿಯಲು ಬಿಡಬೇಕು. ಪ್ಯಾನ್'ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಕೆಂಪಗೆ ಹುರಿದು ಗರಂ ಮಸಾಲಾ ಹಾಕಬೇಕು. ಇದನ್ನು ಈಗಾಗಲೇ ಕುದಿಯುತ್ತಿರುವ ಕರ್ರಿಗೆ ಹಾಕಿ 1 ನಿಮಿಷ ಕುದಿಸಿದರೆ, ರುಚಿಕರವಾದ ಮಂಗಳೂರು ಸ್ಪೆಷಲ್ ಚಿಕನ್ ಕರ್ರಿ ಸವಿಯಲು ಸಿದ್ಧ.