ಈಗಾಗಲೇ ಸರ್ಕಾರಿ ಆಸ್ಪತ್ರೆಗಳು, 600 ಆಯುಷ್ ಔಷದಾಲಯಗಳು ಹಾಗೂ 2,300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಕಳೆದ 2 ತಿಂಗಳಿನಿಂದಲೂ ಈ ಔಷಧಿಗಳನ್ನು ವಿತರಿಸಲಾಗುತ್ತಿದೆ. ರೋಗಿಗಳಿಗೆ ಅಲೋಪತಿ ಹಾಗೂ ಹೋಮಿಯೋಪತಿ ಸಂಯೋಜಿತ ಔಷಧಿಯನ್ನು ಸುದೀರ್ಘವಾಗಿ ನೀಡುವುದರಿಂದ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಮುಖ್ಯ ಆರೋಗ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೇಳಿದ್ದಾರೆ.