ಭಾರತದಲ್ಲಿ ಸಾಂಕ್ರಾಮಿಕ ರೋಗ ಎನಿಸುವಷ್ಟು ಅತೀ ವೇಗವಾಗಿ ಬೆಳೆಯುತ್ತಿರುವ ಕಾಯಿಲೆಯೆಂದರೆ ಅದು ಮಧುಮೇಹ. ದೇಹದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದೇ ರಕ್ತದಲ್ಲಿ ಮತ್ತು ಮೂತ್ರದಲ್ಲಿ ಹೆಚ್ಚು ಸಕ್ಕರೆ ಅಂಶಕ್ಕೆ ಕಾರಣವಾಗುವ ದೇಹಸ್ಥಿತಿಯೇ ಮಧುಮೇಹ. ಮಧುಮೇಹವನ್ನು ಸಂಪರ್ಕವಾಗಿ ನಿರ್ವಹಿಸದಿದ್ದರೆ, ದೀರ್ಘಾವಧಿಯಲ್ಲಿ ಹೃದ್ರೋಗ, ಪಾರ್ಶ್ವವಾಯು, ದೃಷ್ಟಿ ಮಾಂದ್ಯತೆ, ನರದೌರ್ಬಲ್ಯ ಹಾಗೂ ನಪುಂಸಕತೆ ಇತ್ಯಾದಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.