ಇದಕ್ಕೆ ಪ್ರತಿಕ್ರಯಿಸಿರುವ ಶರಣ ಪ್ರಕಾಶ ಪಾಟೀಲ, ನಾನು ಏಕೆ ರಾಜಿನಾಮೆ ನೀಡಬೇಕು? ಈ ಹಗರಣದಲ್ಲಿ ನನ್ನ ಪಾತ್ರವಿಲ್ಲ, ಹಾಗಾಗಿ, ನಾನ್ಯಾಕೆ ರಾಜಿನಾಮೆ ನೀಡಲಿ? ಎಂದ ಅವರು, ನಾನು ಸಿಐಡಿ ತನಿಖೆ ಸಹಕರಿಸುವೆ. ನಾನು ತಪ್ಪಿತಸ್ಥರಿಗೆ ಸಹಾಯ ಮಾಡುವ ವ್ಯಕ್ತಿಯಲ್ಲ. ನನ್ನ ಕಚೇರಿಯಲ್ಲಿ ತುಂಬಾ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಯಾರ್ಯಾದರೂ ತಪ್ಪು ಮಾಡಿದರೆ ಅದಕ್ಕೆ ನಾನ್ಯಾಕೆ ಹೊಣೆಯಾಗಬೇಕು. ಅದು ಅವರ ವೈಯಕ್ತಿಕ ಜೀವನವಾಗಿರುತ್ತದೆ ಎಂದು ಅವರು ಸಮರ್ಥನೆ ನೀಡಿದ್ದಾರೆ.